ಬದುಕು – ನಾರಾಯಣ ರೈ ಕುಕ್ಕುವಳ್ಳಿ
ಬದುಕು ಬದುಕು ಸುಖಮಯ ದು:ಖಮಯ… ವಾಸ್ತವ ವಿಷಯ ! ಕೆಲವರು… ಗೋಳಾಡುವರು.. ಹಲವರು… ತೇಲಾಡುವರು ! ಬದುಕು ನಮಗೆ ವಿಧಿಯ ಕೊಡುಗೆ- ಎಂಬ ಭಾವವೇ ಇಲ್ಲ.. ಇತರರ ಬದುಕಿಗೆ ಮುಳ್ಳಾಗಿ ಕಾಡುವುದ ಬಿಡಲೇ ಇಲ್ಲ….! ಎಲ್ಲವೂ ನನ್ನದೆ. ನನಗೇ ಎಲ್ಲ…. ದುರಾಸೆ ಬಿಟ್ಟಿಲ್ಲ…! ಹೌದು ವಿಧಿ- ಬೀಸುತ್ತಿದೆ… ಚಾಟಿಯೇಟು… ದಪ್ಪ ಚರ್ಮದ ನಮಗೆ ತಾಗೀತೇ ಪೆಟ್ಟು ? ಬದುಕ ಅನುಭವಿಸ ಬೇಕು ಬದುಕಲು ಬಿಡ ಬೇಕು !!! – ✍️ ನಾರಾಯಣ ರೈ ಕುಕ್ಕುವಳ್ಳಿ.