ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣೆ: ಅಧ್ಯಕ್ಷರಾಗಿ ಬಿಜೆಪಿ ಯುವ ನಾಯಕ ಶರತ್ ಕುಮಾರ್ ಮಾಡಾವು ಮತ್ತು ಉಪಾಧ್ಯಕ್ಷರಾಗಿ ಸುಮಿತ್ರಾ ದಿವಾಕರ್ ಅವಿರೋಧ ಆಯ್ಕೆ
ಕೆಯ್ಯೂರು ಗ್ರಾಮ ಪಂಚಾಯತ್ ನ ಅಧ್ಯಕ್ಷೀಯ ಚುನಾವಣೆ ನಡೆದಿದ್ದು ಈ ಸಲವೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲಾಗಿದೆ. ನೂತನ ಅಧ್ಯಕ್ಷರಾಗಿ ಕೆಯ್ಯೂರು ಗ್ರಾಮದ ಐದನೇ ವಾರ್ಡ್ ಬಾ ಸದಸ್ಯರಾದ ಬಿಜೆಪಿ ಯಾ ಯುವ ನಾಯಕರಾದ ಶರತ್ ಕುಮಾರ್ ಮಾಡವು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮತ್ತು ಉಪಾಧ್ಯಕ್ಷರಾಗಿ ಬಿಪಿಜೆ ಬೆಂಬಲಿತ ಸುಮಿತ್ರಾ ದಿವಾಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ಪುತ್ತೂರು ತಾಲೂಕು ಚುನಾವಣಾ ಅಧಿಕಾರಿ ಸಮ್ಮುಖದಲ್ಲಿ ನಡೆನಡೆಸಲಾಯಿತು.
ಪಂಚಾಯತ್ ನ ನಿರ್ಗಮಿತ ಬಿಜೆಪಿ ಬೆಂಬಲಿತ ಅಧ್ಯಕ್ಷರಾದ ಜಯಂತಿ ಎಸ್ ಭಂಡಾರಿ, ಪುತ್ತೂರು ಮಾಜಿ ಶಾಸಕರಾದ ಸಂಜೀವ ಮಠoದೂರು, ಬೂಡಿಯಾರ್ ರಾಧಾಕೃಷ್ಣ, ಸಾಜ ರಾಧಾಕೃಷ್ಣ ಆಳ್ವ, ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಚನಿಲ ತಿಮ್ಮಪ್ಪ ಶೆಟ್ಟಿ, ಅಪ್ಪಯ್ಯ ಮಣಿಯಾಣಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ, ಪಂಚಾಯತ್ ಕಾರ್ಯದರ್ಶಿಗಳು, ಬಿಜೆಪಿ ಮಂಡಲ ಅಧ್ಯಕ್ಷರಾದ ಪ್ರಕಾಶ್ ಆಳ್ವಾ, ಕೆಯ್ಯೂರು ಗ್ರಾಮ ಪಂಚಾಯತ್ ಸದಸ್ಯರು, ಬಿಜೆಪಿ ಗ್ರಾಮ ಸಮಿತಿಯ ಪದಾಧಿಕಾರಿಗಳು, ಸಾರ್ವಜನಿಕರು, ಬಿಜೆಪಿ ಕಾರ್ಯಕರ್ತರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು, ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಲಾಯಿತು.
![](https://i0.wp.com/coolinglass.com/wp-content/uploads/2023/08/WhatsApp-Image-2023-08-16-at-2.58.05-PM.jpeg?resize=910%2C683&ssl=1)
![](https://i0.wp.com/coolinglass.com/wp-content/uploads/2023/08/WhatsApp-Image-2023-08-16-at-4.09.22-PM.jpeg?resize=910%2C512&ssl=1)
![keyyuru Panchayath election resutl](https://i0.wp.com/coolinglass.com/wp-content/uploads/2023/08/WhatsApp-Image-2023-08-16-at-4.09.20-PM-1-1.jpeg?resize=910%2C512&ssl=1)